🙏ಓಂ ಜೈ ಮಾತಾ ಓಂ ಜೈ ಗುರುದೇವ🙏
🌸ಕಶ್ಯಪ ಸೂತ್ರಗಳು🌸
ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು…..
🙏ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ🙏
🌸ಕಶ್ಯಪ ಸೂತ್ರ – 3🌸
🌹 ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ 🌹
ಒಳ್ಳೆಯ ಚಿಂತನೆಯಿಂದ ಒಳ್ಳೆಯ ಚಿಂತನೆಗಳು, ಕೆಟ್ಟ ಯೋಚನೆಗಳಿಂದ ಮತ್ತಷ್ಟು ಕೆಟ್ಟ ಯೋಚನೆಗಳು – ಹೀಗೆ ಸುಖ,ದುಃಖಗಳನ್ನು ನಾವೇ ಆಹ್ವಾನಿಸುತ್ತೇವೆ. ಕಶ್ಯಪರು ಹೇಳುವಂತೆ – ಮಾನವ ದುಃಖವನ್ನು ನಿರಾಕರಿಸಿ ಸುಖವನ್ನು ಸ್ವೀಕರಿಸಿದರೆ ಸಾಲದು. ಸುಖ ದುಃಖಗಳೆರಡನ್ನೂ ದಾಟುವುದೇ ಮಾನವ ಧರ್ಮ. ಸುಖ ದುಃಖ ಎರಡನ್ನೂ ಗೆಲ್ಲುವಂತಹ ಮನಸ್ಸನ್ನು ಬೆಳೆಸಿಕೊಂಡರೆ ಮಾತ್ರ ಅವನು ಮೃತ್ಯುವನ್ನು ಗೆಲ್ಲಲು ಸಾಧ್ಯ.
ಈ ಮಾತನ್ನು ಕಶ್ಯಪರು ಆದಿಪರಾಶಕ್ತಿಯ ಪ್ರೇರಣೆಯಿಂದ, ಸತತವಾದ ಮನನದಿಂದ ಹೇಳಿರುತ್ತಾರೆ. ಹೀಗಾದರೆ ಮಾತ್ರ ನಾವು ಪರಮಾನಂದವನ್ನು ಕಾಣಬಹುದು, ಅನುಭವಿಸಬಹುದು, ಇಚ್ಛಾಮರಣಿಯಾಗಬಹುದು ಎಂದು ಅವರು ದೃಢವಾಗಿ ನುಡಿದಿದ್ದಾರೆ.
🌟ಆ ಮಾತೆಯು ನಮ್ಮ ಜೊತೆ ಮೊಟ್ಟ ಮೊದಲು ಕೊಟ್ಟು ಕಳುಹಿಸಿದ್ದೇ ಮೃತ್ಯು. ಆದರೆ ಅದರೊಂದಿಗೇ ಅದನ್ನು ಗೆಲ್ಲುವ ಸಾಮರ್ಥ್ಯವನ್ನು ಕೂಡ ನಮಗೆ ಕೊಟ್ಟಿದ್ದಾಳೆ.🌟 ನಮ್ಮ ಕರ್ಮಫಲಕ್ಕೆ ಅನುಸಾರವಾಗಿ ನಾವು ಈ ಸಾಮರ್ಥ್ಯವನ್ನು ಹೊಂದಿರುತ್ತೇವೆ. ನಮ್ಮ ಮನಃಶಕ್ತಿ, ಸಂಕಲ್ಪಶಕ್ತಿಗಳಿಂದ ನಾವು ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬಾಲಕೃಷ್ಣನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನ ಮೇಲೆ ನಿಲ್ಲಿಸಿದ ಹಾಗೆ, ಆಂಜನೇಯನು ಶ್ರದ್ಧಾಭಕ್ತಿಗಳಿಂದ ಶ್ರೀ ರಾಮನನ್ನು ತನ್ನ ಹೃದಯದಲ್ಲಿ ಸ್ಥಾಪಿಸಿ ಸಂಜೀವಿನಿ ಪರ್ವತವನ್ನೇ ಎತ್ತಿದ ಹಾಗೆ,
🌟ದೇವತಾ ಶಕ್ತಿಯನ್ನು ದೃಢವಾಗಿ ನಮ್ಮಲ್ಲಿ ಸ್ಥಾಪಿಸಿಕೊಂಡರೆ ಏನನ್ನಾದರೂ ಸಾಧಿಸಬಹುದು.🌟
(ನಾಳೆ ಮುಂದುವರಿಯುವುದು)
(ಈ ಕೃತಿಯ ವಿಸ್ತೃತ ರೂಪವು “ಮಲ್ಲಾರ” ಮಾಸಪತ್ರಿಕೆಯ ಮೇ- 2018 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಚಂದಾದಾರರಾಗಲು ಸಂಪರ್ಕಿಸಿ – 9341259083)
no replies